ಯಲ್ಲಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೆಕರ್ ಜಯದ ಹಿನ್ನೆಲೆಯಲ್ಲಿ ಬನವಾಸಿಯಲ್ಲಿ ಮಂಗಳವಾರ ಬಿಜೆಪಿ ಮುಖಂಡರು, ಪಧಾದಿಕಾರಿಗಳು ಹಾಗು ಕಾರ್ಯಕರ್ತರು ಪಟಾಕಿ ಸಿಡಿಸಿ ಬಿಜೆಪಿ ಗೆಲುವಿನ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅರವಿಂದ ಶೆಟ್ಟಿ, ದ್ಯಾಮಣ್ಣ ದೊಡ್ಡಮನಿ, ಶಿವಕುಮಾರ್ ಗೌಡರ್, ಗಣಪತಿ ನಾಯ್ಕ ಬಾಶಿ, ದತ್ತಾತ್ರೇಯ ಭಟ್ಟ, ಬನವಾಸಿ ಪಂಚಾಯತ್ ಅಧ್ಯಕ್ಷೆ ತುಳುಸಾ ಆರೇರ್, ಬಾಶಿ ಪಂಚಾಯತ್ ಅಧ್ಯಕ್ಷೆ ದಾಕ್ಷಾಯಣಿ ನಾಯ್ಕ, ಪಂಚಾಯತ್ ಸದಸ್ಯರಾದ ಸಿದ್ದು ನೆರಗಲ್, ಅಶೋಕ್ ಪೊನ್ನಪ್ಪ, ನಾಗರಾಜ ಕಪಗೇರಿ, ಶಿವಕುಮಾರ್ ಉಪ್ಪಾರ, ಗಜಾನನ ಗೌಡರ್, ವಿನಯ ಗೌಡರ್, ಬಸವಂತ ನಾಯ್ಕ, ಬನವಾಸಿ ಬಿಜೆಪಿ ಶಕ್ತಿ ಕೇಂದ್ರದ ಚಂದ್ರಶೇಖರ ಗೌಡರ್ ಹಾಗೂ ವೀರೇಂದ್ರ ಗೌಡರ್, ಪ್ರೇಮಕುಮಾರ ನಾಯ್ಕ, ಸೇರಿದಂತೆ ಇನ್ನಿತರರು ಇದ್ದರು.