Slide
Slide
Slide
previous arrow
next arrow

ಡಿ.18ಕ್ಕೆ ಬೃಹತ್ ಲೋಕ ಅದಾಲತ್

300x250 AD

ಕಾರವಾರ: ಕುಮಟಾ ನ್ಯಾಯಾಲಯದಲ್ಲಿ ದಾಖಲಾದ ವಿವಿಧ ಪ್ರಕರಣಗಳ ಇತ್ಯರ್ಥಕ್ಕಾಗಿ ಡಿಸೆಂಬರ್ 18 ರಂದು ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ.

ಸದರಿ ಲೋಕ ಅದಾಲತ್‍ನಲ್ಲಿ ದೌರ್ಜನ್ಯ ನಷ್ಟ ಪರಿಹಾರ ಕುರಿತ ತಕರಾರುಗಳು, ಮೋಟಾರ್ ವೆಹಿಕಲ್ ಪ್ರಕರಣಗಳು, ಬ್ಯಾಂಕುಗಳ ಸಾಲ ವಸೂಲಿ, ಸಿವಿಲ್ ವ್ಯಾಜ್ಯಗಳು, ಚೆಕ್ ಬೌನ್ಸ್ ಪ್ರಕರಣಗಳು ಸೇರಿ ಹಲವು ಬಗೆಯ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿರುತ್ತದೆ.

300x250 AD

ಕಕ್ಷಿದಾರರಿಗೆ ಖರ್ಚಿಲ್ಲದೇ ತ್ವರಿತವಾಗಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ನಾಯಕ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ನರೇಂದ್ರ ಬಿ. ಆರ್ ಅವರನ್ನು ಒಳಗೊಂಡಂತೆ ಕುಮಟಾ ತಾಲೂಕು ಕಾನೂನು ಸೇವಾ ಸಮಿತಿ ತಿಳಿಸಿದೆ.

Share This
300x250 AD
300x250 AD
300x250 AD
Back to top