Slide
Slide
Slide
previous arrow
next arrow

ವಾನಳ್ಳಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

300x250 AD

ಶಿರಸಿ: ತಾಲೂಕಿನ ಶ್ರೀ ಗಜಾನನ ಮಾಧ್ಯಮಿಕ ಶಾಲೆ ವಾನಳ್ಳಿಯ ಶ್ರೀ ಶ್ರೀಪಾದ ಹೆಗಡೆ ಕಡವೆ ಸ್ಮೃತಿ ಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಹಾಗೂ ವಿದ್ಯಾರ್ಥಿ ಸಂಸತ್ ಉದ್ಘಾಟನೆ ಕಾರ್ಯಕ್ರಮ ನಡೆಯಿತು.


ವಿನಾಯಕ ನಾಯಕ ಗೋಕರ್ಣ ಉದ್ಯಮಿಗಳು ಶಾಲೆಯ ಸಮವಸ್ತ್ರ ವೆಚ್ಚ ಭರಿಸುತ್ತಿರುವುದನ್ನು ಸ್ಮರಿಸಲಾಯಿತು. ಸಮವಸ್ತ್ರ ವಿತರಿಸಿ ಮಾತನಾಡಿದ ಎಂ.ಜಿ.ಸಿ.ಟ್ರಸ್ಟ್ ಅಧ್ಯಕ್ಷ ಎನ್.ಎಸ್.ಹೆಗಡೆ ಕೋಟಿಕೊಪ್ಪ ಶಾಲೆಯಲ್ಲಿ ನಿಶ್ಶುಲ್ಕ ಶಿಕ್ಷಣ ನೀಡುತ್ತಿದ್ದು, ಇದೀಗ ದಾನಿಗಳ ಸಹಕಾರದಿಂದ ಸಮವಸ್ತ್ರವನ್ನೂ ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಹೇಳಿದರು.

300x250 AD


ನಂತರ ವಿದ್ಯಾರ್ಥಿಗಳ ಕಳೆದ ಶೈಕ್ಷಣಿಕ ವರ್ಷದಿಂದ ಕುಂಠಿತವಾಗಿದ್ದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಪರಿಹಾರ ಹಾಗೂ ಶಾಲೆಯಲ್ಲಿ ಕೋವಿಡ್ ನಿಯಮ ಪಾಲನೆ ಕುರಿತು ಪಾಲಕರು ಹಾಗೂ ಶಿಕ್ಷಕರು ಸಂವಾದ ನಡೆಸಿದರು.

Share This
300x250 AD
300x250 AD
300x250 AD
Back to top