ಕುಮಟಾ: ತಾಲೂಕಾ ಹೋಬಳಿ ವ್ಯಾಪ್ತಿಯ ಪಿಂಚಣಿ ಅದಾಲತ್ ಕಾರ್ಯಕ್ರಮವು ಇಲ್ಲಿನ ಪುರಭವನದಲ್ಲಿ ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 5 ಸಂಧ್ಯಾಸುರಕ್ಷಾ, 2 ನಿರ್ಗತಿಕ ವಿಧವಾ ವೇತನ ಹಾಗೂ 1 ಮನಸ್ವಿನಿ ಅರ್ಜಿಗಳನ್ನೊಡಗೂಡಿ ಒಟ್ಟೂ 8 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೇ ಸ್ಥಳದಲ್ಲಿಯೇ 21 ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಟಾ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡರವರು, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಗಳ ಕುರಿತು ವಿವರಿಸಿದರು. ಶಿರಸ್ತೇದಾರ್ ಪುಷ್ಪ ನಾಯ್ಕ ಸೇರಿಸಂತೆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.