Slide
Slide
Slide
previous arrow
next arrow

ಕುಮಟಾದಲ್ಲಿ ಪಿಂಚಣಿ ಅದಾಲತ್; 8 ಅರ್ಜಿ ಸ್ವೀಕಾರ

300x250 AD


ಕುಮಟಾ: ತಾಲೂಕಾ ಹೋಬಳಿ ವ್ಯಾಪ್ತಿಯ ಪಿಂಚಣಿ ಅದಾಲತ್ ಕಾರ್ಯಕ್ರಮವು ಇಲ್ಲಿನ ಪುರಭವನದಲ್ಲಿ ಉಪವಿಭಾಗಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ 5 ಸಂಧ್ಯಾಸುರಕ್ಷಾ, 2 ನಿರ್ಗತಿಕ ವಿಧವಾ ವೇತನ ಹಾಗೂ 1 ಮನಸ್ವಿನಿ ಅರ್ಜಿಗಳನ್ನೊಡಗೂಡಿ ಒಟ್ಟೂ 8 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೇ ಸ್ಥಳದಲ್ಲಿಯೇ 21 ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ವಿತರಿಸಲಾಯಿತು.

300x250 AD


ಕಾರ್ಯಕ್ರಮದಲ್ಲಿ ಕುಮಟಾ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡರವರು, ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯ ಗಳ ಕುರಿತು ವಿವರಿಸಿದರು. ಶಿರಸ್ತೇದಾರ್ ಪುಷ್ಪ ನಾಯ್ಕ ಸೇರಿಸಂತೆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top