ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಚಿಣ್ಣರಿಗಾಗಿ ನಡೆಸಲಾದ ಕೃಷ್ಣ ವೇಷ ಛದ್ಮವೇಷ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ.
ಎಲ್.ಕೆ.ಜಿ ವಿಭಾಗದಲ್ಲಿ ಅಪೇಕ್ಷಾ ಭಟ್ಟ ಪ್ರಥಮ, ಅಥರ್ವ ಕೋಣೆಮನೆ ದ್ವಿತೀಯ ಹಾಗೂ ಸಾಚಿ ಪಟಗಾರ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಯು.ಕೆ.ಜಿ ವಿಭಾಗದಲ್ಲಿ ಆಶಿತಾ ಭಟ್ಟ ಪ್ರಥಮ, ನಿಷ್ ನಾಯ್ಕ ದ್ವಿತೀಯ ಹಾಗೂ ಅನ್ವಿತ್ ಬೋರ್ಕರ್ ತೃತಿಯ ಸ್ಥಾನ ಪಡೆದಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ ಸೋಮವಾರ ಶಾಲಾ ಆವಾರದಲ್ಲಿ ಕೃಷ್ಣ ವೇಷ ಛದ್ಮವೇಷ ಸ್ಫರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ಮುಕ್ತಾ ಶಂಕರ್, ಡಾ. ಡಿ.ಕೆ ಗಾಂವ್ಕರ್, ಭವ್ಯ ಶೆಟ್ಟಿ ಹಾಗೂ ಮೇಧಾ ಭಟ್ಟ ಜವಾಬ್ದಾರಿ ನಿರ್ವಹಿಸಿದ್ದರು.