ಶಿರಸಿ: ಚಳಿಯಿಂದ ರಕ್ಷಣೆಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವೇಳೆ ವ್ಯಕ್ತಿಯ ಮೈಗೆ ಬೆಂಕಿ ಹೊತ್ತುಕೊಂಡು ಅನಾಹುತ ಸಂಭವಿಸಿದೆ. ಬೆಂಕಿಯಿಂದ ಮೈ ಸುಟ್ಟು ಹೋಗಿದ್ದು, ತಕ್ಷಣ ಮನೆಯವರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಗಣಪತಿ ಗೌಡ ಬೆಂಕಿ ಹತ್ತಿಸಿಕೊಂಡ ವ್ಯಕ್ತಿಯಾಗಿದ್ದು, ಚಳಿ ತಡೆಯಲಾರದೆ ಶಾಖದ ಮೊರೆ ಹೋದ ವ್ಯಕ್ತಿ ಒಲೆಯಲ್ಲಿ ಬೆಂಕಿ ಕಾವು ಪಡೆಯಲು ಮುಂದಾಗಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಒಲೆ ಮೇಲೆ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಹಿರೇಕಳವೆಯಲ್ಲಿ ನಡೆದಿದೆ.