ಶಿರಸಿ: ನಗರದ ಕೋಟೆಕೆರೆಯಲ್ಲಿ ವೃದ್ಧನೋರ್ವ ಬಿದ್ದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ಅರೆಕೊಪ್ಪದ ಶಂಕ್ರಪ್ಪ ಯಲ್ಲಪ್ಪ ನಾಗೋಹಿ(60) ಎಂದು ಗುರುತಿಸಲಾಗಿದ್ದು ಮದ್ಯಪಾನದ ಮತ್ತಿನಲ್ಲಿ ಕೆರೆಯಬಳಿ ತಿರುಗುವಾಗ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ.
ಗುರುವಾರ ಬೆಳಿಗ್ಗೆ ಶವ ತೇಲತೊಡಗಿದಾಗ ಘಟನೆ ಬೆಳಕಿಗೆ ಬಂದಿದ್ದು, ಬುಧವಾರ ತಡರಾತ್ರಿ ದುರ್ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಶಿರಸಿ ಮಾರುಕಟ್ಟೆ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.