Slide
Slide
Slide
previous arrow
next arrow

ಏ:28ಕ್ಕೆ ಶಿರಸಿಗೆ ಪ್ರಧಾನಿ ಮೋದಿ: ಪೂರ್ವಭಾವಿ ಸಭೆ

300x250 AD

ದಾಂಡೇಲಿ : ಲೋಕಸಭಾ ಚುನಾವಣೆಯ ಅಂಗವಾಗಿ ಪ್ರಚಾರ ಸಮಾವೇಶಕ್ಕೆ ಏಪ್ರಿಲ್ 28 ರಂದು ಪ್ರಧಾನಿ ನರೇಂದ್ರ ಮೋದಿಯವರು ಶಿರಸಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಯುವ‌ ಮೋರ್ಚಾ ಪದಾಧಿಕಾರಿಗಳ ಪೂರ್ವಭಾವಿ ಸಭೆಯೂ ಬಿಜೆಪಿ ಜಿಲ್ಲಾ ಯುವ ಮೊರ್ಚದ ಅಧ್ಯಕ್ಷರಾದ ಪ್ರೇಮಕುಮಾರ್ ನಾಯಕ, ಪಕ್ಷದ ಮಂಡಳದ ಅಧ್ಯಕ್ಷರಾದ ಬುದ್ಧಿವಂತ ಗೌಡ ಪಾಟೀಲ್ ಹಾಗೂ ಯುವ‌ ಮೋರ್ಚಾ ಅಧ್ಯಕ್ಷರಾದ ಪವನ್ ಕೊಣ್ಣೂರು ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ‌ ಗಿರೀಶ ಟೊಸುರ್, ಮಿಥುನ್‌ ನಾಯಕ, ಜಿಲ್ಲಾ ಯುವ ಮೊರ್ಚ ಉಪಾಧ್ಯಕ್ಷರಾದ ಸಿದ್ದು ಶಟ್ಟಿ, ಯುವ‌ಮೋರ್ಚಾ ಜಿಲ್ಲಾ ಸಮಿತಿ ಸದಸ್ಯರಾದ ಪುನಿತ್ ಪ್ರಭಾಕರ ನಾಯಕ, ಮಹಾಶಕ್ತಿ ಕೆಂದ್ರದ ಅಧ್ಯಕ್ಷರಾದ ಪ್ರಶಾಂತ ಬಸೂರ್ತೆಕರ್ ಹಾಗೂ ಚೆನ್ನಬಸಪ್ಪ ಮುರಗೋಡ, ದಾಂಡೇಲಿಯ ಯುವ ಮೊರ್ಚ ಪ್ರಧಾನ‌ ಕಾರ್ಯದರ್ಶಿ ಮಂಜುನಾಥ ಶಟ್ಟಿ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top