ಯಲ್ಲಾಪುರ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಗಿವ್ ಇಂಡಿಯಾದ ಸಹಯೋಗದೊಂದಿಗೆ ಆ.18 ಬುಧವಾರ ತಾಲೂಕಿನ ಶಿರನಾಲಾ ಹಿರಿಯ ಪ್ರಾಥಮಿಕ ಶಾಲೆಯ ಆಯ್ದ 19 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕೋಪಕರ್ಣಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶುಭಾ ಪೈ, ರಾಘವೇಂದ್ರ ಭಟ್, ಗೀತಾ ನೀಲೆಕಣಿ ಮತ್ತು ಶಿರನಾಲಾ ಶಾಲಾ ಶಿಕ್ಷಕರು ಹಾಗು ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.