ಶಿರಸಿ: ಸ್ವಾತಂತ್ರ್ಯ ದಿನಾಚರಣೆಯಂದು ಆನ್ಲೈನ್ನಲ್ಲಿ ಅಂತರಾಜ್ಯ ಮಟ್ಟದ ‘ಸ್ವರಚಿತ ದೇಶಭಕ್ತಿ ಗೀತೆ ರಚನೆ ಮತ್ತು ಗಾಯನ, ವಾಚನ’ ಸ್ಪರ್ಧೆ ನಡೆಯಲಿದೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ಬೆಂಗಳೂರು) ಮತ್ತು ಶಿರಸಿ ತಾಲೂಕು ಘಟಕದಿಂದ ಸ್ಪರ್ಧೆ ನಡೆಯಲಿದೆ. ಮೂರು ವಾಟ್ಸಪ್ ಗುಂಪುಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸಂಜೆ 1 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಸ್ಪರ್ಧೆ ನಡೆಯಲಿದೆ.
ಭಾಗವಹಿಸಲಿಚ್ಚಿಸುವವರು ಮೊ: 776032919(ರಾಜು ಉಗ್ರಾಣಕರ), 9343565155(ಕೃಷ್ಣ ಪದಕಿ) ಅವರನ್ನು ವಾಟ್ಸಪ್ ಮೂಲಕ ಸಂಪರ್ಕಿಸಬಹುದು. ಇದು ವೇದಿಕೆಯ 75ನೇ ಸ್ಪರ್ಧೆಯಾಗಿದ್ದು, ಪ್ರಥಮ ರೂ. 500, ದ್ವಿತೀಯ ರೂ.400 ಮತ್ತು ತೃತೀಯ ರೂ. 300 ನೀಡಲಾಗುವುದು. ಅತ್ಯುತ್ತಮ 10, ಮೆಚ್ಚುಗೆ 10 ಸ್ಥಾನಗಳಿಗೆ ಇ-ಪ್ರಮಾಣಪತ್ರ ನೀಡಲಾಗುವುದೆಂದು ತಾಲೂಕು ಘಟಕದ ಅಧ್ಯಕ್ಷ ಕೃಷ್ಣ ಪದಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.