ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ನಡೆಸುವ ಶ್ರೀ ರಾಜರಾಜೇಶ್ವರಿ ಸಂಸ್ಕೃತ ವಿದ್ಯಾಲಯದಲ್ಲಿ ಕೋವಿಡ್ ನಿರೋಧಕ ಲಸಿಕೆಯನ್ನು ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರುಗಳಿಗೆ ನೀಡಲಾಯಿತು.
ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂರು, ಸ್ವರ್ಣವಲ್ಲೀಯಲ್ಲಿ 50 ಡೋಸ್ ಲಸಿಕೆ ನೀಡಲಾಯಿತು. ಡಾ.ಮಧುಕರ ಪಾಟೀಲ, ಹಿರಿಯ ಮಹಿಳಾ ಸಹಾಯಕಿ ಶಾರದಾ, ಕಿರಿಯ ಮಹಿಳಾ ಸಹಾಯಕಿಯರಾದ ಪಾರ್ವತಿ, ಸುವರ್ಣ, ಕಿರಿಯ ಆರೋಗ್ಯ ಸಹಾಯಕರಾದ ಬೋಸಯ್ಯ ಸಿಟಿ ಹಾಗೂ ಪ್ರೇಮನಾಥ ಸಿಎಚ್ ಓಗಳಾದ ಆಶಾ, ಉಷಾ, ಸಲೀಂ ತಾಂತ್ರಿಕ ಸಹಾಯಕಿ ಶ್ವೇತಾ, ಆಶಾ ಕಾರ್ಯಕರ್ತರು ಇದ್ದರು. ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸಿಬ್ಬಂದಿಗಳು ಸಹಕಾರ ನೀಡಿದರು.