Slide
Slide
Slide
previous arrow
next arrow

ಜಿಂಕೆ‌‌ಯನ್ನು ಬಂಧನದಲ್ಲಿಟ್ಟು ಸಾಕಿದ್ದ ವ್ಯಕ್ತಿಯ ಬಂಧನ

300x250 AD

ಶಿರಸಿ: ಅಕ್ರಮವಾಗಿ ಜಿಂಕೆಯನ್ನು ಬಂಧನದಲ್ಲಿಟ್ಟಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯವರು ಬಂಧಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ.

ತಾಲೂಕಿನ ಕಲಗಾರ ನಿವಾಸಿ ಹಬೀಬ್ ರೆಹಮಾನ್ ಮಹ್ಮದ್ ಸಾಬ್ ಬಂಧಿತ ವ್ಯಕ್ತಿಯಾಗಿದ್ದು ಈತ ಕಳೆದ ಆರುತಿಂಗಳಿನಿಂದ ಜಿಂಕೆಯೊಂದನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ. ವಿಷಯ ತಿಳಿದು ದಾಂಡೇಲಿ ಸಿ.ಐ.ಡಿ ಅರಣ್ಯ ಘಟಕದ ಅಧಿಕಾರಿಗಳು ದಾಳಿ ಮಾಡಿ ಜಿಂಕೆಯನ್ನು ರಕ್ಷಿಸಿದ್ದಾರೆ.

ಅರೋಪಿಯನ್ನು15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಜಿಂಕೆಯನ್ನು ರಕ್ಷಿಸಿ ಶಿರಸಿ ಅರಣ್ಯ ಇಲಾಖೆಯ ಸುಪರ್ದಿಗೆ ನೀಡಲಾಗಿದೆ‌.

300x250 AD

ಕಾರ್ಯಾಚರಣೆಯಲ್ಲಿ ದಾಂಡೇಲಿ ಸಿ.ಐ.ಡಿ.ಅರಣ್ಯ ಘಟಕದ ಪಿಎಸ್ಸೈ ಮಂಜುನಾಥ ಬೋರಕರ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top