ಶಿರಸಿ: ಕನ್ನಡ ಬಳಗ, ಐಎಂಎ ಶಿರಸಿ, ನಯನ ಫೌಂಡೇಶನ್, ರೋಟರಿ ಕ್ಲಬ್ ಶಿರಸಿ ಇವರ ಸಹಯೋಗದಲ್ಲಿ ‘ವಚನ ಸಾಹಿತ್ಯದಲ್ಲಿ ಸ್ವಾಸ್ತ್ಯ’ ಎಂಬ ವಿಷಯದ ಕುರಿತು ಜ.8 ಶನಿವಾರ ಸಂಜೆ 7:30 ರಿಂದ 8.30ರವೆರೆಗೆ ಕಾರ್ಯಕ್ರಮ ನಡೆಯಲಿದೆ.
ವಚನ ಸಾಹಿತ್ಯದಲ್ಲಿ ಸ್ವಾಸ್ತ್ಯ ಎಂಬ ವಿಷಯದ ಕುರಿತಾಗಿ ಕನ್ನಡ ನಾಡಿನ ಹೆಮ್ಮೆಯ ಅಂತರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞೆ, ಸಾಹಿತಿ, ವಾಗ್ಮಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಇವರು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮವನ್ನು ನಯನ ಫೌಂಡೇಶನ್ ಯುಟ್ಯೂಬ್ ಚಾನೆಲ್ https://youtu.be/G1JeAGeSs84 ನಲ್ಲಿ ಲೈವ್ ನಲ್ಲಿ ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.