ಶಿರಸಿ: ತಾಲೂಕಿನ ಎಕ್ಕಂಬಿ ಸಮೀಪದ ಸಾಲೆಕೊಪ್ಪದ ಹಿರಿಯ, ಹಸಿರು ರಕ್ಷಕ ವೆಂಕಟರಮಣ ಹೆಗಡೆ ಪಟೇಲ ಅವರನ್ನು ಬೆಂಗಳೂರಿನ ಪ್ರಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀಹರ್ಷ ಗರುಡನಗಿರಿ ಸಮ್ಮಾನಿಸಿ ಗೌರವಿಸಿದರು.
98 ವರ್ಷ ಪೂರೈಸಿದ ಹಿರಿಯ ಜೀವಿ ವೆಂಕಟರಮಣ ಹೆಗಡೆ ಅವರನ್ನು ಅವರಜೀವ ಮಾನದ ಸಾಧನೆಗೆ ಅಭಿನಂದಿಸಿ ಪ್ರಣಾಮ ಸಲ್ಲಿಸಿದರು. ಈ ವೇಳೆ ಬೆಂಗಳೂರಿನ ಪ್ರಭಾಕರ ಹಾಗೂ ಅಕ್ಷಯ್ ಇತರರು ಇದ್ದರು.