ತಾವದಾಶ್ರೀಯತೇ ಲಕ್ಷ್ಮ್ಯಾ ತಾವದಸ್ಯ ಸ್ಥಿರಂ ಯಶಃ
ಪುರುಷಸ್ತಾವದೇವಾಸೌ ಯಾವನ್ಮಾನಾನ್ನ ಹೀಯತೇ ||
ಮಾನ ಅನ್ನುವುದಕ್ಕೆ ಮಿತಿ, ಅಳತೆ ಅನ್ನುವ ಅರ್ಥಗಳಿವೆ. ಮೀರಬಾರದ ಸೀಮೆಯೊಂದಕ್ಕೆ ಮಾನವೆಂಬ ಹೆಸರು ನಿಂತಿದ್ದೂ ಇದೆ. ಪುರುಷನೊಬ್ಬನ ಬಳಿ ಸಂಪತ್ತು ಸೇರುವುದು ಮತ್ತು ಉಳಿಯುವುದು, ಯಶೋಲಕ್ಷ್ಮಿಯು ಅವನ ಕೈ ಹಿಡಿಯುವುದು, ಮತ್ತು ಆ ಪುರುಷನು ಪುರುಷನೆನಿಸಿಕೊಳ್ಳುವುದೆಲ್ಲವೂ ಆತನು ಮಾನದಿಂದ ಚ್ಯುತನಾಗುವವರೆಗೆ ಮಾತ್ರವೇ. ಮಾನದಿಂದ ಜಾರಿದವನ ಬಳಿ ಸಂಪತ್ತಾಗಲೀ, ಯಶಸ್ಸಾಗಲೀ, ಪೌರುಷವಾಗಲೀ ಉಳಿಯಲಾರದು.
ಶ್ರೀ ನವೀನ ಗಂಗೋತ್ರಿ