ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯು ಗಿವ್ ಇಂಡಿಯಾ ಸಹಯೋಗದಲ್ಲಿ ತಾಲೂಕಿನ ಯಡಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲೊಕೋಪಕರ್ಣ ವಿತರಿಸಿದರು.
ಯಡಳ್ಳಿ ಶಾಲೆಯ ಆಯ್ದ 20 ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಕಲಿಕಾ ಸಾಮಗ್ರಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮನುವಿಕಾಸ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಶುಭಾ ಪೈ, ರಾಘವೇಂದ್ರ ಭಟ್, ಪವನ ಬೊಮ್ಮನಹಳ್ಳಿ ಮತ್ತು ಯಡಳ್ಳಿಯ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.