ಶಿರಸಿ: ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ 71 ನೇ ವರ್ಷದ ಜನ್ಮ ದಿನದ ಪ್ರಯುಕ್ತ ಬಿಜೆಪಿ ಶಿರಸಿ ನಗರ ಮಂಡಲ ವತಿಯಿಂದ ಶಿರಸಿ ವಿವೇಕಾನಂದ ನಗರದ ಎಸಳೆ ಕೆರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ಮೋದಿಜಿ ರವರ ಸ್ವಚ್ಛತಾ ಅಭಿಯಾನದ ಬಗ್ಗೆ ಜನತೆಯಲ್ಲಿ ಜಾಗ್ರತೆ ಮೂಡಿಸಲಾಯಿತು. ಅಲ್ಲದೇ ಸೆ.17ರಿಂದ ಅ.7ರವರೆಗೆ ಸೇವಾ ಸಮರ್ಪಣಾ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಈ ವೇಳೆ ನಗರ ಮಂಡಲ ಪದಾಧಿಕಾರಿಗಳು ಹಾಗು ವಿವಿಧ ಮೋರ್ಚಾದ ಜಿಲ್ಲಾ ಹಾಹೂ ನಗರ ಮೋರ್ಚಾ ಪದಾಧಿಕಾರಿಗಳು ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ್, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮತ್ತು ನಗರಸಭಾ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು