ಯಲ್ಲಾಪುರ: ಇಡಗುಂದಿಯ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಆವರದಲ್ಲಿ ಹಮ್ಮಿಕೊಂಡಿದ್ದ ಧ್ಯಾನ ಶಿಬಿರ ಗುರುವಾರ ಮುಕ್ತಾಯಗೊಂಡಿತು.
ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಂಗಸಂಸ್ಥೆಯಾದ ವಿಶ್ವದರ್ಶನ ಸೇವಾ ವತಿಯಿಂದ ಸೋಮವಾರದಿಂದ ಗುರುವಾರದ ವರೆಗೆ ಐದು ದಿನಗಳ ಧ್ಯಾನ ಶಿಬಿರ ಆಯೋಜಿಸಲಾಗಿತ್ತು.
ಇದರ ಸಮಾರೋಪ ಕಾರ್ಯಕ್ರಮದಲ್ಲಿ ಧ್ಯಾನ ತರಬೇತಿ ನೀಡಿದ ಬೆಂಗಳೂರಿನ ಮಹರ್ಷಿ ವೇದ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಅನಂತ ಭಟ್ಟ ಶೀಗೇಪಾಲ್ ಅವರನ್ನು ಗೌರವಿಸಲಾಯಿತು. ಇಡಗುಂದಿ ಗ್ರಾಮ ಪಂಚಾಯತ ಸದಸ್ಯರಾದ ವಿ.ಎನ್ ಭಟ್ಟ ಏಕಾನ್, ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ನಾಯ್ಕ, ವಿಶ್ವದರ್ಶನ ಸೇವಾ ತಂಡದ ಸದಸ್ಯ ಎಂ.ಆರ್. ಭಟ್ಟ, ಶೇಖರ್ ಉಳ್ಳಾಲ, ನಾಗೇಂದ್ರ ಶೆಟ್ಟಿ ಇತರರು ಇದ್ದರು.