ಹೊನ್ನಾವರ: ಸ್ವಿಫ್ಟ್ ಕಾರಿನಲ್ಲಿ ದನದ ಮಾಂಸ ಸಾಗಾಟ ವೇಳೆ ಖಚಿತ ಮಾಹಿತಿ ಆಧರಿಸಿದ ಪೊಲೀಸರು ಗೇರಸೊಪ್ಪಾ ಚೆಕ್ ಪೆÇೀಸ್ಟ್ನಲ್ಲಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ ನಿಲ್ಲಿಸದೆ ಆರೋಪಿತರು ಪರಾರಿಯಾಗಿಲು ಯತ್ನಿಸಿದ ತಾಲೂಕಿನಲ್ಲಿ ನಡೆದಿದೆ.
ಆರೋಪಿಗಳು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ. ಈ ಸಂಬಂಧ ಮಾಹಿತಿ ಪಡೆದುಕೊಂಡು ಹೊನ್ನಾವರ ಪೆÇಲೀಸರು ಗೇರಸೊಪ್ಪಾ ಸರ್ಕಲ್ ಬಳಿ ಕಾರನ್ನು ತಡೆಹಿಡಿದಿದ್ದಾರೆ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಹಾನಗಲ್ ತಾಲೂಕಿನ ಕರಗುದ್ರಗಿ ಮೂಲದ ಮೌಲಾಲಿ ಭಾಷಾಸಾಬ್ ತೊಟದ ಹಾಗು ಮಂಜುನಾಥ ಲಕ್ಷ್ಮಣ ಓಲೇಕಾರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ 170 ಕೆಜಿ ದನದ ಮಾಂಸವಿದ್ದು, ಪೆÇಲೀಸರು ವಶಪಡಿಸಿಕೊಂಡಿದ್ದಾರೆ.