• Slide
    Slide
    Slide
    previous arrow
    next arrow
  • ಪೌಷ್ಟಿಕ ಆಹಾರದಿಂದ ಆರೋಗ್ಯಕರ ಜೀವನ ಸಾಧ್ಯ:ವೀಕ್ಷಿತಾ ಶೆಟ್ಟಿ

    300x250 AD

    ಕಾರವಾರ: ಜಿಲ್ಲಾ ಪಂಚಾಯತಿ, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ತಾಲ್ಲೂಕು ಪಂಚಾಯತಿ, ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪೌಷ್ಟಿಕತೆ ಹಾಗೂ ಲಿಂಗತ್ವ ಮತ್ತು ಋತುಚಕ್ರ ನೈರ್ಮಲ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ ಚೆಂಡಿಯಾ ಸ್ಫೂರ್ತಿ ಸಂಜೀವಿನಿ ಒಕ್ಕೂಟದ ಕಾರ್ಯಾಲಯದಲ್ಲಿ ಜರುಗಿತು.

    ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಎಸ್‌ಬಿಸಿಸಿ ಸಂಯೋಜಕಿ ವೀಕ್ಷಿತಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌಷ್ಟಿಕಾಂಶಯುತ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ಸಾಧ್ಯ. ಸ್ವ ಸಹಾಯ ಸಂಘದ ಮಹಿಳೆಯರು ಆರೋಗ್ಯ ಮತ್ತು ನೈರ್ಮಲ್ಯ ಕಡೆಗೆ ಕಾಳಜಿ ವಹಿಸಬೇಕು. ನಿಮಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ತಮಗೆ ಇರುವ ಹಕ್ಕಿನ ಬಗ್ಗೆ ಅರಿತು ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

    300x250 AD

    ಅತಿಥಿಯಾಗಿ ಸ್ವಚ್ಛ ಭಾರತ ಮಿಷನ್ ನೈರ್ಮಲ್ಯ ಮತ್ತು ಶುಚಿತ್ವ ಸಮಾಲೋಚಕ ಗೋಪಾಲಕೃಷ್ಣ ಹುಲ್ಸವಾರ ಮಾತನಾಡಿ, ಸ್ವಚ್ಛ ಭಾರತ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಚೆಂಡಿಯಾ ಸ್ಫೂರ್ತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಎಂಬಿಕೆ ನಿಖಿತಾ ಮಾಂಜ್ರೇಕರ್ ನಿರೂಪಿಸಿ, ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top