ಯಲ್ಲಾಪುರ: ಪಟ್ಟಣದಲ್ಲಿ ಗೂಡಂಗಡಿ- ರಸ್ತೆ ಪಕ್ಕದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಅರಣ್ಯ ಇಲಾಖೆ ಮತ್ತು ಪ.ಪಂ ಅಧಿಕಾರಿಗಳು ತೆರಳಿ ಪ್ಲಾಸ್ಟಿಕ್ ಬಳಸದಂತೆ ತಿಳಿವಳಿಕೆ ನೀಡಿ, ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುವನ್ನು ನೀಡಿ ಜಾಗೃತಿಗೊಳಿಸಿದರು.
ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಪ.ಪಂ ಆರೋಗ್ಯಾಧಿಕಾರಿ ಗುರು, ಅರಣ್ಯ ಇಲಾಖೆಯ ಸಂಜಯಕುಮಾರ ಬೋರಗಲ್ಲಿ ಮತ್ತಿತರರು ಪಾಲ್ಗೊಂಡಿದ್ದರು.