ಅಕರುಣತ್ವಮಕಾರಣವಿಗ್ರಹಃ ಪರಧನೇ ಪರಯೋಷಿತಿ ಚ ಸ್ಪೃಹಾ
ಸುಜನಬಂಧುಜನೇಷ್ವಸಹಿಷ್ಣುತಾ ಪ್ರಕೃತಿಸಿದ್ಧಮಿದಂ ಹಿ ದುರಾತ್ಮನಾಮ್ ||
ಕರುಣೆಯಿಲ್ಲದಿರುವಿಕೆ, ಅಕಾರಣವಾಗಿ ತಂದುಕೊಳ್ಳುವ ವೈಮನಸ್ಸು, ಇನ್ನೊಬ್ಬರ ಹಣ ಮತ್ತು ಇನ್ನೊಬ್ಬರ ಹೆಂಡತಿಯಲ್ಲಿ ಆಸಕ್ತಿ, ಸಜ್ಜನರು ಮತ್ತು ಸ್ವಬಾಂಧವರಲ್ಲಿ ಅಸಹಿಷ್ಣುತೆಯ ಭಾವ –ಇವಿಷ್ಟು ದುರಾತ್ಮರಾದವರಿಗೆ ಸ್ವತಃ ಸಿದ್ಧವಾಗಿ ಬಂದಿರುತ್ತವೆ.
ಶ್ರೀ ನವೀನ ಗಂಗೋತ್ರಿ