Slide
Slide
Slide
previous arrow
next arrow

ವಿದ್ಯುತ್ ದಕ್ಷತೆ ಹೆಚ್ಚಳಕ್ಕೆ ಕೇಂದ್ರದ 8,500 ಕೋಟಿ ರೂ.ಅನುದಾನ; ಸಚಿವ ಸುನೀಲ್ ಕುಮಾರ್

300x250 AD

ಬೆಂಗಳೂರು: ಕರ್ನಾಟಕದ ವಿದ್ಯುತ್ ಕಾರ್ಯದಕ್ಷತೆಯನ್ನು ವೃದ್ಧಿಸುವ ಸಲುವಾಗಿ ಕೇಂದ್ರ ಸರಕಾರವು 8,500 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದೆ. ಆರ್‍ಡಿಎಸ್‍ಎಸ್ ಯೋಜನೆಯಡಿ ಈ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದ್ದಾರೆ.

ಹೊಸ ಲೈನ್ ಗಳ ಸ್ಥಾಪನೆ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿಕೆ, ಸಿಂಗಲ್ ಪೇಸ್ ಸಮಸ್ಯೆ ಪರಿಹಾರ, ಟ್ರಿಪ್ ಮುಂತಾದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

300x250 AD

ಒಟ್ಟು ಅನುದಾನದಲ್ಲಿ 1,100 ಕೋಟಿ ರೂಪಾಯಿಗಳನ್ನು ಮೆಸ್ಕಾಂಗೆ ಮೀಸಲಿಡಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಗೆ 290 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿ 400ಕೆವಿ ಸಬ್ಸ್ಟೇಶನ್ ನಿರ್ಮಾಣದ ಪ್ರಸ್ತಾವನೆ ಇದೆ. ಗ್ರಾಹಕರಿಗೆ ಮತ್ತು ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಇದು ಅನುಕೂಲ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದಿದ್ದಾರೆ.

Share This
300x250 AD
300x250 AD
300x250 AD
Back to top