ಶಿರಸಿ: ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಒಡ್ಡೋಲಗ ರಂಗಪರ್ಯಟನ ಹಿತ್ತಲಕೈ ಕಲಾತಂಡ ಕಲಾವಿದರು ಜಯಂತ ಕಾಯ್ಕಿಣಿ ವಿರಚಿತ, ಗಣಪತಿ ಹಿತ್ತಲಕೈ ನಿರ್ದೇಶನದ ‘ಕೋಮಲ ಗಾಂಧಾರ’ ನಾಟಕ ಪ್ರದರ್ಶನ ನೀಡಿದರು. ಪ್ರಸ್ತುತ ಜಗತ್ತಿನ ಆಗುಹೋಗುಗಳ ಎಳೆಯ ಕಥಾವಸ್ತು ಹೊಂದಿರುವ ಈ ನಾಟಕ ನೆರೆದವರನ್ನು ರಂಜಿಸಿತು.