ಅಂಕೋಲಾ: ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ತಾಲೂಕಿನ ನೀಲಂಪುರದ ನಿವಾಸಿ ನಿವೃತ್ತ ಅರಣ್ಯ ಅಧಿಕಾರಿ ಶಾಂತಾ ಅಂಕೋಲೆಕರ್ ಅವರ ಸ್ವಗೃಹದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕಾಧ್ಯಕ್ಷ ಮುರಳಿಧರ ಬಂಟ, ಜಿಲ್ಲಾ ಸಂಚಾಲಕ ಹಾಗೂ ಮಾಧ್ಯಮ ಪ್ರಮುಖ ನಿತೇಶ ಕೇಣಿ, ತಾಲೂಕ ಉಪಾಧ್ಯಕ್ಷ ಪ್ರಕಾಶ್ ಅಂಕೋಲೆಕರ್, ಪ್ರ. ಕಾರ್ಯದರ್ಶಿ ಗುರು ಶೇಡಗೇರಿ ಇದ್ದರು.