ಹೊನ್ನಾವರ: ತಾಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ 92 ನೇ ವಾರ್ಷಿಕ ಮಹಾಸಭೆಯು ದುಗಾರ್ಂಬಾ ದೇವಾಲಯದ ಸಭಾಭವನದಲ್ಲಿ ನಡೆಯಿತು.
2020-21 ನೇ ಸಾಲಿನಲ್ಲಿ ಸಂಘ 1693 ಸದಸ್ಯರನ್ನು ಹೊಂದಿದ್ದು, ಸಂಘದಎಲ್ಲಾ ವ್ಯವಹಾರದಿಂದರೂಪಾಯಿ 22,91,407 ರಷ್ಟು ನಿಕ್ಕಿ ಲಾಭಗಳಿಸಿದೆ. ಈ ಸಭೆಯಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನ ಮಾಡಲಾಯಿತು.
ಸನ್ಮಾನಿತರಾದ ದೇವರು ಹೆಗಡೆ ಮಾತನಾಡಿ, ಮಾರುಕಟ್ಟೆಗೆ ಬಂದಿರುವ ಹೈಟೆಕ್ ಪೈಬರ್ ದೋಟಿಗಳನ್ನು ಸೊಸೈಟಿಯಿಂದ ಖರೀದಿಸಿ ಕೃಷಿಕ ಸದಸ್ಯರಿಗೆ ಬಾಡಿಗೆರೂಪದಲ್ಲಿ ನೀಡಿದರೆ ಅನುಕೂಲವಾಗುವುದುಎಂದು ಸಲಹೆ ನೀಡಿದರು. ಅಧ್ಯಕ್ಷಆರ್.ಪಿ.ನಾಯ್ಕ ಮಾತನಾಡಿ, ತಾಲೂಕಿನಲ್ಲಿಯೇಅತೀ ಹೆಚ್ಚಿನ ಬೆಳೆವಿಮೆ ನಮ್ಮ ಸಂಘಕೆ ಸಿಕ್ಕಿದೆ. ನಮ್ಮ ಸಂಘದಕಾರ್ಯಕ್ಷೇತ್ರದೊಡ್ಡದಿರುವಕಾರಣ ಈಗ ಜನ್ನಕಡ್ಕಲ್ ಹಾಗೂ ಗುಂಡಬಾಳದಲ್ಲೂ ಪಡಿತರ ವಿತರಿಸುವ ವ್ಯವಸ್ಥೆಯನ್ನು ಮಾಡಿಗ್ರಾಹಕರಿಗೆ ನೆರವಾಗಿದ್ದೇವೆಎಂದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.