ಯಲ್ಲಾಪುರ: ಪಟ್ಟಣದ ಯುವ ಚಿತ್ರಕಲಾವಿದ ಜ್ಯೋತಿರಾದಿತ್ಯ ಭಟ್ ಬಿಡಿಸಿದ ತಮ್ಮ ಭಾವಚಿತ್ರವನ್ನು ವೀಕ್ಷಿಸಿದ ಪರಮಪೂಜ್ಯ ಪೇಜಾವರ ಮಠಾಧೀಶರು ಹಾಗೂ ಶ್ರೀರಾಮಜನ್ಮಭೂಮಿ ನ್ಯಾಸ್ನ ಟೃಸ್ಟಿಗಳಾದ ಶ್ರೀ.ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜ್ಯೋತಿರಾದಿತ್ಯನು ತಾನು ಬಿಡಿಸಿದ ಶ್ರೀಗಳ ಭಾವಚಿತ್ರವನ್ನು ಇಂದು ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಸಮರ್ಪಿಸಿದನು. ಕಲಾವಿದನ ಕೈಯಲ್ಲಿ ಮೂಡಿಬಂದ ತಮ್ಮ ಭಾವಚಿತ್ರವನ್ನು ನೋಡಿ ಪೇಜಾವರ ಶ್ರೀಗಳು ಸಂತಸ ವ್ಯಕ್ತಪಡಿಸಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.