ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಬಾಲೀಗದ್ದೆಯಲ್ಲಿ ದಿ.ಪಾರ್ವತಿ ಭಟ್ಟ ಹಾಗೂ ದಿ.ಜಾಹ್ನವಿ ಭಟ್ಟ ಇವರ ಸ್ಮರಣಾರ್ಥ ಪ್ರಸಿದ್ಧ ಕಲಾವಿದರಿಂದ ಸತ್ಯವಾನ್ ಸಾವಿತ್ರಿ ತಾಳಮದ್ದಲೆ ಅಕ್ಟೋಬರ್ 31 ರಂದು ಮಧ್ಯಾಹ್ನ 3.30 ಕ್ಕೆ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಶಶಾಂಕ ಬೋಡೆ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ಮಹೇಶ ಭಟ್ಟ ಇಡಗುಂದಿ, ಶಿವರಾಮ ಭಾಗ್ವತ ಮಣ್ಕುಳಿ, ಶ್ರೀಧರ ಭಟ್ಟ ಅಣಲಗಾರ, ತಿರುಮಲೇಶ್ವರ ಭಟ್ಟ ಬಾಲೀಗದ್ದೆ ಪಾತ್ರ ನಿರ್ವಹಿಸಲಿದ್ದಾರೆ.