ಶಿರಸಿ: ಭಾನುವಾರ ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದ ಕೆಲ ಸಮಯದಲ್ಲಿಯೇ ಶಿರಸಿಯ ಕಸ್ತೂರಬಾ ನಗರದ ಪ್ರಾಥಮಿಕ ಶಾಲೆಯ ಸಮೀಪ ಪಟಾಕಿ (ಗರ್ನಲ್) ಸಿಡಿದ ಶಬ್ಧ ಕೇಳಿಬಂದಿದೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಪಂದ್ಯ ಮುಗಿಯುವ ಹತ್ತು ನಿಮಿಷಕ್ಕೂ ಮುನ್ನ ಪೋಲೀಸ್ ಬೀಟ್ ವೆಹಿಕಲ್ ಈ ಮಾರ್ಗವಾಗಿ ಹೋಗಿತ್ತು, ಅದರ ನಂತರ ಪಂದ್ಯ ಮುಗಿದ ಕೆಲ ಸಮಯದಲ್ಲೇ ಪಟಾಕಿ ಶಬ್ಧದಂತೆ ಕೇಳಿ ಬಂದಿರುವುದಾಗಿ ಮಾತುಗಳು ಸಾರ್ವಜನಿಕರಲ್ಲಿ ಹಾಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.
ಈ ಕುರಿತು ಶಿರಸಿ ಸಿಪಿಐ ರಾಮಚಂದ್ರ ನಾಯಕ ‘e – ಉತ್ತರ ಕನ್ನಡ’ದ ಜೊತೆ ಮಾತನಾಡಿದ್ದು, ನಮ್ಮ ಇಲಾಖೆಯು ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತವಾಗಿದ್ದು, ಅಂತಹ ಯಾವುದೇ ಶಬ್ಧ ಅಥವಾ ಘಟನೆ ಸಂಭವಿಸಿಲ್ಲ. ಈ ಕುರಿತಾಗಿ ಕೇವಲ ಗಾಳಿಸುದ್ದಿ ಹಬ್ಬಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿದರು. ಸಾರ್ವಜನಿಕರು ಇಂತಹ ಊಹಾಪೋಹಕ್ಕೆ ಕಿವಿಗೊಡಬಾರದು ಎಂದು ಅವರು ತಿಳಿಸಿದ್ದಾರೆ.