ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪಟ್ಟಣ ಶಾಖೆಯ ಕಸ್ತೂರಬಾ ನಗರ 11 ಕೆ.ವಿ ಮಾರ್ಗದ ವಿದ್ಯಾನಗರ, ಪ್ರಗತಿನಗರ, ಲಯನ್ಸ್ ನಗರ, ಆದರ್ಶ ನಗರ, ಕಾಲೇಜು ರಸ್ತೆ, ಶಾಂತಿನಗರ, ಸಹ್ಯಾದ್ರಿ ಕಾಲೋನಿ ಪ್ರದೇಶಗಳಲ್ಲಿ ಅ.7 ಗುರುವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.