Slide
Slide
Slide
previous arrow
next arrow

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಹಾಯ ಧನದ ಚೆಕ್ ಹಸ್ತಾಂತರ

300x250 AD

ಕುಮಟಾ: ಗೋಕರ್ಣದ ತಾಮ್ರಗೌರಿ ದೇವಾಲಯದಲ್ಲಿ ಹೊಸ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆರ್. ಎಸ್. ಗೋಪಿ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಎರಡು ದಶಕಗಳಿಂದ ನಿಂತಿದ್ದ ಆಗಿನ ಸೋಲ್ ಟ್ರಸ್ಟಿಯಾಗಿದ್ದ ದಿ. ಎಸ್. ಡಿ ನಿರ್ವಾಣೇಶ್ವರರು ಪ್ರಾರಂಭಿಸಿದ್ದ ಸತ್ಸಂಪ್ರದಾಯವನ್ನು ಇದೀಗ ಖಾಯಂ ಮುಂದುವರಿಸಲು ಇಂದು ತೀರ್ಮಾನಿಸಲಾಯಿತು. ಸದ್ಯದಲ್ಲೇ ನಡೆಸಲ್ಪಡುವ ಗೋಕರ್ಣದ ಲಯನ್ಸ್ ಕ್ಲಬ್ ನೇತೃತ್ವದ ಬಡ ಸಾರ್ವಜನಿಕರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕೈಂಕರ್ಯಕ್ಕೆ ತಾಮ್ರಗೌರೀ ದೇವಳದ ವತಿಯಿಂದ 11, 111 ರೂ. ಗಳ ಚೆಕ್‌ನ್ನು ಸಂಸ್ಥೆಯ ಸದಸ್ಯರ ಉಪಸ್ಥಿತಿಯಲ್ಲಿ ಅಧ್ಯಕ್ಷ ಡಾ. ಜಗದೀಶ್‌ರಿಗೆ ಹಸ್ತಾಂತರಿಸಿ ಗೋಕರ್ಣ ಲಯನ್ಸ್ ಕ್ಲಬ್‌ನ ಈ ಪುಣ್ಯದ ಕಾರ್ಯಕ್ಕೆ ಕೈ ಜೋಡಿಸಿದರು.

300x250 AD
Share This
300x250 AD
300x250 AD
300x250 AD
Back to top