ಸಿದ್ದಾಪುರ: ತಾಲೂಕಿನ ನಿಲ್ಕುಂದ ದೇವಸ್ಥಾನದ ವೀರಭದ್ರ ಸ್ವಾಮಿಯ ಪ್ರತಿಷ್ಠಾಪನೆ ಕಾರ್ಯಕ್ರಮ ನ.16 ಮಂಗಳವಾರದಂದು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಲ್ಕುಂದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಟ್ಟಡದ ಜೀರ್ಣೋದ್ದಾರದ ಕೆಲಸ 2020 ನ.4 ರಂದು ಪ್ರಾರಂಭಗೊಂಡು ಈಗ ಪ್ರತಿಷ್ಠಾಪನೆಯ ಹಂತಕ್ಕೆ ಬಂದು ತಲುಪಿದೆ. ಈ ಕಾರ್ಯದಲ್ಲಿ ತನು ಮನ ಧನ ಹಾಗೂ ಶ್ರಮದಾನದಿಂದ ಸಹಕರಿಸಿದ ಎಲ್ಲ ಭಕ್ತಾದಿಗಳು ಈ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ದೇವಸ್ಥಾನದ ಟ್ರಸ್ಟಿ ಪ್ರವೀಣ್ ಶಿವಲಿಂಗ ಗೌಡರ್ ತೆಪ್ಪಾರ್ ತಿಳಿಸಿದ್ದಾರೆ.