ಹಳಿಯಾಳ: ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಪಿ.ಸಿ.ಸಿ. ಪ್ಲಾಂಟಿನ ಕಂಟೈನರ್ ಹತ್ತಿರ ಇಟ್ಟಿದ್ದ ಅಂದಾಜು 14, 800 ರೂ.ಮೌಲ್ಯದ 15.2 ಎಂ.ಎಂ ಅಳತೆಯ ಹಾಗೂ 6.2 ಎಂ.ಎಂ ಅಳತೆಯ ತಲಾ 16 ಮೀಟರ್ ತಾಮ್ರದ ಕೊಳವೆಗಳನ್ನು ಕಳವುಗೈದ ಘಟನೆ ಇಂದು ನಡೆದಿದೆ.
ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಕಾಗದ ಕಾರ್ಖಾನೆಯ ಭದ್ರತಾ ವಿಭಾಗದ ಸಹಾಯಕ ಭದ್ರತಾ ವ್ಯವಸ್ಥಾಪಕರಾದ ಕುಶಾಲಪ್ಪ ಸುಬ್ಬೇಗೌಡ ಅವರು ದೂರು ನೀಡಿದ್ದು, ತನಿಖಾ ಪಿಎಸೈ ಕಿರಣ್ ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.