ಭಟ್ಕಳ: ಭಟ್ಕಳದ ಪ್ರಸಿದ್ದ ಪರಶುರಾಮ ಭಟ್ಕಳ ತಂಡದ ಕಬ್ಬಡ್ಡಿ ಆಟಗಾರನಾಗಿ ಹೆಸರು ಮಾಡಿದ್ದ, ಹೃದಯಾಘಾತದಿಂದ ಮೃತನಾದ ಹೆಸರಾಂತ ಕಬ್ಬಡ್ಡಿ ಆಟಗಾರ ಮನೋಜ ನಾಯ್ಕ ಮೃತ ದೇಹದ ಅಂತಿಮ ರ್ದಶನಕ್ಕೆ ಮೂಢಭಟ್ಕಳ ಬೈಪಾಸ್ ಸಮೀಪ ಸಕಲ ಸಿದ್ದತೆ ನಡೆಸಿ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಜಮಾಯಿಸಿದ್ದರು.
ಆಂಬ್ಯುಲೆನ್ಸ್ ಮೂಲಕ ಮೃತ ದೇಹವನ್ನು ಕುಂದಾಪುರ ಆಸ್ಪತ್ರೆಯಿಂದ ಕರೆದಂದು ಅಂತಿಮ ದರ್ಶನಕ್ಕೆ ಇರಿಸಲಾಯಿತು. ಈ ವೇಳೆ ತನ್ನ ನೆಚ್ಚಿನ ಆಟಗಾರನ ಅಂತಿಮ ದರ್ಶನ ಪಡೆದ ಆತನ ಬಂಧು-ಬಳಗದವರು ಹಾಗೂ ಸ್ನೇಹಿತರು ಕಣ್ಣೀರಿಟ್ಟರು. ನಂತರ ಮೃತ ದೇಹವನ್ನು ಮೃತನ ಸ್ವಗ್ರಹಕ್ಕೆ ಕರೆದೊಯ್ದು ವಿಧಿ ವಿಧಾನ ನೆರವೇರಿಸಿ ಮುಟ್ಟಳ್ಳಿ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.