ಯಲ್ಲಾಪುರ: ತಾಲೂಕಿನ ಕಿರವತ್ತಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಬಿ.ನಾಯ್ಕಗೆ ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಬುಧವಾರ ಕಿರವತ್ತಿಯಲ್ಲಿ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.
ಸ್ಥಳಿಯ ಪ್ರಮುಖರಾದ ವಿಲ್ಸನ್ ಫರ್ನಾಂಡೀಸ್, ಅಹಮ್ಮದ್ ಕೊಳಿಕೇರಿ, ಚನ್ನಪ್ಪ ಹರಿಜನ, ಅಲೆಕ್ಸ್ ಸಿದ್ದಿ, ಮುಸ್ತಾಕ ಶೇಖ್ ನಾಗರಾಜ ಹೊಸಮನಿ, ಧೂಳು ದೊಯಿಪಡೆ, ಲಕ್ಕು ಪಿಂಗಳೆ, ವಿಠ್ಠು ಎಡಗೆ, ತುಕಾರಾಮ ಎಡಗೆ, ವಿಠ್ಠು ಎಡಗೆ, ದಾಕ್ಲು ದೊಯಿಪಡೆ, ಬಾಗು ಎಡಗೆ, ಬಾಬು ಪಾಟೀಲ್, ಅಂಬ್ರು ತಾಟೆ ಮುಂತಾದವರು ಇದ್ದರು.