ಯಲ್ಲಾಪುರ: ರಕ್ಷಾ ಬಂಧನ ಕಾರ್ಯಕ್ರಮಕ್ಕೆ ಶಾಲೆಗೆಂದು ತೆರಳಿದ ಯುವತಿಯೋರ್ವಳಿ ನಾಪತ್ತೆಯಾದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹುತ್ಕಂಡ ಗ್ರಾಮದ ಹುತ್ನಳ್ಳಿಯ 18 ವರ್ಷದ ಯುವತಿ ನಾಪತ್ತೆಯಾದವಳು. ಈಕೆ ಆ.26 ರಂದು ಹುತ್ನಳ್ಳಿ ಶಾಲೆಗೆ ರಕ್ಷಾಬಂಧನ ಕಾರ್ಯಕ್ರಮಕ್ಕೆಂದು ತೆರಳಿದವಳು ಅಲ್ಲಿಂದ 3 ಗಂಟೆ ಸುಮಾರಿಗೆ ಯಾರಿಗೂ ಹೇಲದೆ ಹೋದವಳು ಮನೆಗೂ ವಾಪಸ್ಸಾಗಿಲ್ಲ. ಈಕೆ ಕಾಣೆಯಾದ ಬಗ್ಗೆ ಸ್ನೇಹಿತ, ಸಂಂಧಿಕರ ಮನೆಯಲ್ಲಿ ವಿಚಾರಿದರೂ ಆಕೆ ಎಲ್ಲೂ ಪತ್ತೆಯಾಗಿಲ್ಲ. ಆದ್ದರಿಂದ ಪಾಲಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ದೂರು ನೀಡಿದ್ದಾರೆ.