ಮುಂಡಗೋಡ: ಮಾಜಿ ಪ್ರಧಾನಿ ದಿ ರಾಜೀವ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ ದೇವರಾಜ ಅರಸು ಅವರ ಜಯಂತಿಯನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಮುಖಂಡರಾದ ವಾಧಿರಾಜ ರಾವ್, ರಾಜು ಭೋವಿ, ನಾಗರಾಜ ಹಂಚಿನಮನಿ, ಮಲ್ಲಿಕಾರ್ಜುನ ಗೌಳಿ, ಬಸವರಾಜ ನಿಡಗುಂದಿ, ಮಮ್ಮದಜಾಫರ ಶಿರಗೋಡ ಸೇರಿದಂತೆ ಮುಂತಾದವರು ಇದ್ದರು.
ಮಿನಿ ವಿಧಾನಸೌಧದಲ್ಲಿ ಆಚರಣೆ: ದಿವಂಗತ ಡಿ.ದೇವರಾಜ ಅರಸು ಅವರ 106ನೇ ವರ್ಷದ ಜಯಂತಿಯನ್ನು ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಗ್ರೇಡ್-2ತಹಸೀಲ್ದಾರ್ ಜಿ.ಬಿ ಭಟ್, ಇಲ್ಲಿನ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುಜಾತ ಹಂಜಿ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಬಾಲೇಶ ಸಿದ್ದಯ್ಯನವರ, ಹಿಂದುಳಿದ ವರ್ಗಗಳ ಇಲಾಖೆಯ ಸಿಬ್ಬಂದಿಗಳಾದ ಕರಿಯಪ್ಪ ಎಚ್, ಮಲ್ಲಿಕಾರ್ಜುನ ಗೌಡರ ಸೇರಿದಂತೆ ಇತರರಿದ್ದರು. ಕಾರ್ಯಕ್ರಮವನ್ನು ಗ್ರಾಮಲೆಕ್ಕಾಧಿಕಾರಿ ಗೋಣಿಬಸಪ್ಪ ನಿರ್ವಹಿಸಿದರು.