ಸ್ವರಾಜ್ಯ @ 75: ‘ಪಾಸ್ಪರಸ್ ಬ್ರಿಟಿಷ್ ಇಂಡಿಯಾ ಗ್ರಂಥಕರ್ತನಾದ ಬ್ರಿಟನ್ನಿನ ಸಂಸತ್ ಸದಸ್ಯನಾದ ವಿಲಿಯಮ್ ಡಿಗ್ಬೀ
‘ಇಂಗ್ಲೇಂಡಿನ ಔದ್ಯೋಗಿಕ ಪ್ರಗತಿಗೆ ಮೂಲಾಧಾರವಾದದ್ದು ಅದು ಬಂಗಾಲ-ಕರ್ನಾಟಕಗಳಿಂದ
ದೋಚಿದ ಅಪಾರವಾದ ಹಣ’ ಎಂದು ಬರೆದಿದ್ದಾನೆ.
ಬ್ರಿಟನ್ ಭಾರತದಿಂದ ಪ್ರತಿವರ್ಷ 2 ಕೋಟಿ ಪೌಂಡ್ ( ಅಂದಾಜು 30 ಕೋಟಿ) ಲೂಟಿ ಮಾಡಿದೆ
ಎಂದು ದಾದಾಭಾಯಿ ನವರೋಜಿ ಲೆಕ್ಕಹಾಕಿದ್ದರು. ಈಸ್ಟ್ ಇಂಡಿಯಾ ಕಂಪನಿ ನಡೆಸಿದ್ದ ಅಸೀಮ
ಶೋಷಣೆ – ಅನಾಚಾರಗಳನ್ನು ಪಟ್ಟಿ ಮಾಡಿ 60,000 ಜನ ಸಹಿ ಮಾಡಿದ್ದ ಮನವಿಯನ್ನು
ರಂಗೋಬಾಪೂಜಿಯವರು 1843ರ ಫೆಬ್ರವರಿಯಲ್ಲಿ ಇಂಗ್ಲೇಂಡಿನ ಸಂಸತ್ತಿಗೆ ಸಲ್ಲಿಸಿದ್ದರು.
1856ರಲ್ಲಿ ಬ್ರಿಟಿಷರು ಯಾವುದೇ ಕಾರಣವಿಲ್ಲದೆ ನ್ಯಾಯಬಾಹಿರವಾಗಿ ಅವಧ ಪ್ರಾಂತವನ್ನು
ವಶಪಡಿಸಿಕೊಂಡಾಗ ಅಲ್ಲಿನ ಸ್ವಾಭಿಮಾನಿ ಜನತೆ ಬಿಲ್ಲು, ಬಾಣ, ಲಾಠಿಗಳಿಂದಲೇ ಹೋರಾಟ
ಮಾಡಿದ್ದರು. ಒಂದು ಲಕ್ಷ ನಾಗರಿಕರೂ ಸೇರಿದಂತೆ ಒಂದೂವರೆ ಲಕ್ಷ ಜನರ ಬಲಿದಾನವಾಯಿತು.
ಇಷ್ಟೆಲ್ಲದರ ಮಧ್ಯೆಯೂ ಭಾರತೀಯ ಸೈನಿಕರು ಬ್ರಿಟಿಷ್ ಸರಕಾರಕ್ಕೆ 39-42ರ ಅಫಘನ್ ಯುದ್ಧ, 40-
42ರ ಚೀನಾ ಯುದ್ಧ, 1852ರ ಎರಡನೇ ಬರ್ಮಾಯುದ್ಧ ಮತ್ತು 54ರ ಕ್ರಿಮಿಯಾ ಯುದ್ಧದಲ್ಲೂ ಸಹಕರಿಸಿದ್ದರು.
- ಸಂಗ್ರಹ