Slide
Slide
Slide
previous arrow
next arrow

ಪ್ರವಾಹಕ್ಕೆ ಸಿಕ್ಕಿ ಕುಸಿದ ಮನೆ; ಕುಟುಂಬಕ್ಕೆ ಧೈರ್ಯ ತುಂಬಿದ ಗಜಾನನ ಪೈ

300x250 AD

ಕುಮಟಾ: ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ವಿವಿಧ ಗ್ರಾಮದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ ಹಲವು ಬಡ ಕುಟುಂಬಗಳ ಮನೆಗೆ ನೀರು ತುಂಬಿ ಕುಸಿದು ಬಿದ್ದಿದ್ದು, ಜಿ.ಪಂ ನಿಕಟಪೂರ್ವ ಸದಸ್ಯ ಗಜಾನನ ಪೈ ಭಾನುವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಶಿರಗುಂಜಿ ಹಾಗೂ ಮಳವಳ್ಳಿ ಗ್ರಾಮದ ವಿವಿಧ ಮನೆಗಳಿಗೆ ತೆರಳಿದ ಅವರು, ಮನೆ, ಕೃಷಿ ಭೂಮಿ ಸೇರಿದಂತೆ ಹಾನಿಗೊಳಗಾದ ಕುಟುಂಬಕ್ಕೆ ಧೈರ್ಯ ತುಂಬಿದರು. ಅಲ್ಲದೇ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪ್ರಮಾಣದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.

300x250 AD

ಈ ಸಂದರ್ಭದಲ್ಲಿ ಪಂಚಾಯತ ಉಪಾಧ್ಯಕ್ಷ ಶ್ರೀಧರ ಪೈ, ಸದಸ್ಯ ವಿನಾಯಕ ನಾಯ್ಕ ಹೆಬೈಲ್, ಪ್ರಮುಖರಾದ ಕಾರ್ತಿಕ ಭಟ್ಟ, ತುಳಸು ಗೌಡ, ಮಂಜುನಾಥ ಗೌಡ, ವೆಂಕಟಿ ಗೌಡ, ನಾಗೇಂದ್ರ ಗೌಡ ಸೇರಿದಂತೆ ಇತರರು ಇದ್ದರು.

Share This
300x250 AD
300x250 AD
300x250 AD
Back to top