ಶಿರಸಿ: ಬಿಸಲಕೊಪ್ಪ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಶತಮಾನೋತ್ಸವದ ವರ್ಷಾಚರಣೆಯ ನಿಮಿತ್ತ ನಡೆದ ದೇವತಾ ಕಾರ್ಯಕ್ರಮಗಳು ಹಾಗೂ ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಪಾದುಕಾಪೂಜೆಯು ಸಾಂಗವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಮಾಹಾಸ್ವಾಮಿಗಳು ಸಂಘದ ನೂತನ ಎಣ್ಣೆ ಗಿರಣಿಯನ್ನು ಉದ್ಘಾಟಿಸಿದರು. ಶ್ರೀಗಳ ಪಾದುಕಾಪೂಜೆಯಲ್ಲಿ ಸಂಘದ ಪದಾದಿಕಾರಿಗಳು, ಸಿಬ್ಬಂದಿಗಳು ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಶ್ರೀಗಳು ಉಪಸ್ಥಿತರೆಲ್ಲರನ್ನೂ ಉದ್ದೇಶಿಸಿ ಆಶೀರ್ವಚನ ನೀಡಿದರು.
ಇದೇ ಸುಸಂದರ್ಭದಲ್ಲಿ ಶತಮಾನೋತ್ಸವದ ಸವಿನೆನಪಿಗೆ ಸಂಘದ ಶೇರು ಸದಸ್ಯರಿಗೆ ನೀಡುವ ನೆನಪಿನ ಕಾಣಿಕೆಯ ವಿತರಣೆಯನ್ನು ಸಾಂಕೇತಿಕವಾಗಿ ಶ್ರೀಗಳ ಅಮೃತ ಹಸ್ತದಿಂದ ಪ್ರಾರಂಭಿಸಲಾಯಿತು