ಮುಂಡಗೋಡ: ತಾಲೂಕಿನ ಕರವಳ್ಳಿ ಗ್ರಾಮದ ಜ್ಯೋತಿ ಕಾಂಬಳೆ ಎಂಬುವರಿಗೆ 108 ಆಂಬುಲೆನ್ಸ್ನಲ್ಲಿ ಹೆರಿಗೆಯಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು ಜ್ಯೋತಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು. 108 ಆಂಬುಲೆನ್ಸ್ನಲ್ಲಿ ಇವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿ ಆಂಬುಲೆನ್ಸ್ ಅನ್ನು ಪಕ್ಕಕ್ಕೆ ನಿಲ್ಲಿಸಿ ತುರ್ತು ವೈದ್ಯಕೀಯ ತಜ್ಞ ಧನರಾಜ ಸಿ. ಬಳೂರು, ಆಶಾ ಕಾರ್ಯಕರ್ತೆ ಭಾಗ್ಯಶ್ರೀ ಕಾಳಿ ಮತ್ತು ಚಾಲಕ ಕೆಂಚೇಶ ಇ.ಎನ್. ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ನಂತರ ಇವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ತಾಯಿ ಮತ್ತು ಗಂಡು ಮಗು ಆರೋಗ್ಯವಾಗಿದ್ದಾರೆ.