ಬೆಂಗಳೂರು: ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 75 ಹೊಸ ಎನ್ಸಿಸಿ ಯುನಿಟ್ಗಳನ್ನು ಆರಂಭಿಸಿ ಒಟ್ಟು 7500 ಹೊಸ ಕೆಡೆಟ್ಗಳಿಗೆ ಅವಕಾಶ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಜಕ್ಕೂರು ವಿಮಾನ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೊಸ 75 ನೇತಾಜಿ ಅಮೃತ ಎನ್ಸಿಸಿ ಶಾಲೆಗಳ ಘೋಷಣೆ ಮಾಡಿದ್ದಾರೆ. 75 ಪೈಲೆಟ್ಗಳ ತರಬೇತಿಗೆ ಚಾಲನೆ ನೀಡಿದ್ದಾರೆ. ಪಿ2006ಟಿ ವಿಮಾನ ಲೋಕಾರ್ಪಣೆ ಮಾಡಿದ್ದಾರೆ ಮತ್ತು ಹೆಲಿ ಟೂರಿಸಂ ಗೆ ಚಾಲನೆ ನೀಡಿದ್ದಾರೆ.
ಎನ್ಸಿಸಿ ಸೇರಲು ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ 12000 ರೂಪಾಯಿ ಮೊತ್ತವನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ಭರಿಸಲು ತೀರ್ಮಾನಿಸಿದೆ ಎಂದಿದ್ದಾರೆ