ಅಂಕೋಲಾ: ತಾಲೂಕಿನ ಸೂರ್ವೆ ಗ್ರಾಮದ ಗ್ರಾಮೀಣ ಪ್ರತಿಭೆ, ಡಿವೈಇಎಸ್ ಬೆಂಗಳೂರು ವಿದ್ಯಾರ್ಥಿ ವಿಶ್ವಜೀತ ರವೀಂದ್ರ ನಾಯಕ ತಮಿಳುನಾಡಿನ ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾನೆ.
ಈತ ಕಾರವಾರ ಅಂಗಡಿ ಶಾಲೆಯ ಶಿಕ್ಷಕಿ ವಿನುತಾ ನಾಯಕ ಹಾಗೂ ರವೀಂದ್ರ ನಾಯಕ ಅವರ ಪುತ್ರನಾಗಿದ್ದಾನೆ.