Slide
Slide
Slide
previous arrow
next arrow

ಪತ್ರಕರ್ತ ಅರ್ಜುನ ಮಲ್ಯ ಕೊಲೆ ಪ್ರಕರಣದ ಮತ್ತಿಬ್ಬರು ಆರೋಪಿಗಳ ಬಂಧನ

300x250 AD


ಭಟ್ಕಳ: ಅರ್ಜುನ್ ಮಲ್ಯ ಎಂಬ ಪತ್ರಕರ್ತರ ಮೇಲಿನ ಹಲ್ಲೆ ಮತು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಮುರುಡೇಶ್ವರ ಮೂಲದ ಭಾಸ್ಕರ ನಾಯ್ಕ (27) ಹಾಗೂ ಮಂಜುನಾಥ ನಾಯ್ಕ (26) ಎಂದು ಗುರುತಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ಈಗಾಗಲೇ ಜೈಲಿನಲ್ಲಿರುವ ರಿಕ್ರಿಯೇಶನ ಕ್ಲಬ್‍ನ ಮಾಲಕ ಮಾದೇವ ನಾಯ್ಕನ ಸಂಗಡಿಗರು ಎನ್ನಲಾಗಿದೆ. ಬಂಧಿತ ಮಾದೇವ ನಾಯ್ಕನ ಸೂಚನೆಯ ಮೇರೆಗೆ ಇವರು ಈ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯ ವೇಳೆಗೆ ಮಾಹಿತಿ ದೊರೆತಿದೆ. ಪತ್ರಕರ್ತ ಅರ್ಜುಲ್ ಮಲ್ಯನ ಚಲನವಲನಗಳ ಬಗ್ಗೆ ಹಲ್ಲೆಕೋರರಿಗೆ ಮಾಹಿತಿ ರವಾನಿಸಿದ್ದ ವ್ಯಕ್ತಿಯೂ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

300x250 AD

ಅರ್ಜುಲ್ ಮಲ್ಯ ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಮುಖ್ಯ ಆರೋಪಿ ರಿಕ್ರಿಯೇಷನ್ ಕ್ಲಬ್‍ನ ಮಾಲಕ ಮಾದೇವ ನಾಯ್ಕನ್ನು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಮಾದೇವ ನಾಯ್ಕನ ಹಿಂದೆ ಯಾರ್ಯಾರು ಈ ಕೇಸಿನಲ್ಲಿ ಸಂಚು ನಡೆಸಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಹೊರಬೀಳಬೇಕಾಗಿದೆ.

Share This
300x250 AD
300x250 AD
300x250 AD
Back to top