Slide
Slide
Slide
previous arrow
next arrow

ಆಕಸ್ಮಿಕ ಬೆಂಕಿಗೆ ಅಡಿಕೆ ತೋಟ ಆಹುತಿ

300x250 AD

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊನ್ನೆಹದ್ದ (ಕೋಡನಮನೆ)ದಲ್ಲಿ ಅಡಕೆ ತೋಟಕ್ಕೆ ಭಾನುವಾರ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ಒಂದುವರೆ ಏಕರೆಯಷ್ಟು ಅಡಕೆ ತೋಟ ಸುಟ್ಟುಹೋಗಿದೆ.
ಹೊನ್ನೆಹದ್ದದ ಚಂದ್ರಶೇಖರ ನರಸಿಂಹ ಹೆಗಡೆ ಹಾಗೂ ಸಂತೋಷ ಎಂ.ಹೆಗಡೆ ಅವರ ಅಡಕೆ ತೋಟ ಇದಾಗಿದೆ. ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಶಿರಸಿಯಿಂದ ಅಗ್ನಿಶಾಮಕ ವಾಹನ ಬರುವುದರೊಳಗೆ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.
ಆಕಸ್ಮಿಕವಾಗಿ ಅಡಕೆ ತೋಟಕ್ಕೆ ಬೆಂಕಿ ಬಿದ್ದಿರುವುದರಿಂದ ಅಡಕೆ ಸಸಿ, ಗಿಡ, ಮರಗಳು ಹಾಗೂ ಬಾಳೆ, ಕಾಳುಮೆಣಸಿನ ಬಳ್ಳಿಗಳು ಸುಟ್ಟು ಹೋಗಿದೆ.

300x250 AD
Share This
300x250 AD
300x250 AD
300x250 AD
Back to top