ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಆವಾರದಲ್ಲಿ ನಿಲ್ಲಿಸಿಟ್ಟ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ಬೈಕನ್ನು ಯಾರೋ ಕಳವು ಮಾಡಿದ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎಸ್.ಆರ್.ಟಿ.ಸಿಯ ಶಿರಸಿ ವಿಭಾಗೀಯ ಕಾರ್ಯಾಗಾರದಲ್ಲಿ ಮೆಕ್ಯಾನಿಕ್ ಆಗಿರುವ ಬಸಯ್ಯ ಹಿರೇಮಠ ಅವರು ಸೆ.3 ರಂದು ಬೆಳಗ್ಗೆ ಯಲ್ಲಾಪುರ ಬಸ್ ನಿಲ್ದಾಣದ ಕ್ಯಾಂಟೀನ್ ಬಳಿ ಬಜಾಜ್ ಪಲ್ಸರ್ ಬೈಕ್ ನಿಲ್ಲಿಸಿದ್ದರು. ಸಂಜೆ ಬಂದು ನೋಡಿದಾಗ ಬೈಕ್ ಇಲ್ಲವಾಗಿದ್ದು, ಈ ಕುರಿತು ಠಾಣೆಯಲ್ಲಿ ದೂರು ನೀಡಿದ್ದಾರೆ.