Slide
Slide
Slide
previous arrow
next arrow

ಭಟ್ಕಳ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ

300x250 AD

ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿದು ಮನೆಯೊಳಗೆ ನಾಲ್ವರು ಸಿಲುಕಿದ್ದಾರೆ. ಗೌರಮ್ಮಜ್ಜಿ ಮನೆಯ ಲಕ್ಷ್ಮೀ ನಾಯ್ಕ (48), ಆಕೆಯ ಪುತ್ರಿ ಲಕ್ಷ್ಮೀ ನಾಯ್ಕ (33), ಪುತ್ರ ಅನಂತ ನಾಯ್ಕ (32) ಹಾಗೂ ಸಹೋದರಿಯ ಮಗ ಪ್ರವೀಣ್ ನಾಯ್ಕ (20) ಸಿಲುಕಿರುವವರು. ಪ್ರವೀಣ್ ನಿನ್ನೆ ರಾತ್ರಿಯಷ್ಟೆ ಮನೆಗೆ ಬಂದು, ಮಳೆಯ ಕಾರಣ ಉಳಿದುಕೊಂಡಿದ್ದ.

ಸದ್ಯ ಗುಡ್ಡ ತೆರವು ಕಾರ್ಯಾಚರಣೆ ಮುಂದುವರಿದಿದೆ. ಮನೆಯ ಅವಶೇಷಗಳು ಕುಸಿದ ಗುಡ್ಡದ ಮಣ್ಣಿನೊಂದಿಗೆ ಸೇರಿಕೊಂಡಿವೆ. ಜೆಸಿಬಿ ಸ್ಥಳಕ್ಕಾಗಮಿಸಲು ವಿಳಂಬವಾದ ಕಾರಣ ಸ್ಥಳೀಯರೆ ಕಾರ್ಯಾಚರಣೆ ನಡೆಸಿದ್ದಾರೆ. ಹರಸಾಹಸಪಟ್ಟು ಅಧಿಕಾರಿಗಳು ಈಗ ಜೆಸಿಬಿ ತಂದಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
#euttarakannadaNews #Bhatkal #BhatkalRain #KarnatakaRain

300x250 AD
Share This
300x250 AD
300x250 AD
300x250 AD
Back to top