Slide
Slide
Slide
previous arrow
next arrow

ಅಕ್ರಮ ಗಾಂಜಾ ಮಾರಾಟ :ಇಬ್ಬರ ಬಂಧನ

300x250 AD

ಶಿರಸಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ಗ್ರಾಮೀಣ ಪೊಲೀಸರು ಶನಿವಾರ ಬೆಳಗಿನ ಜಾವ 3 ಗಂಟೆಗೆ ವಶಕ್ಕೆ ಪಡೆದುಕೊಂಡಿದ್ದಾರೆ.

ತಾಲೂಕಿನ ಬಕ್ಕಳದ ಗದ್ದೇಮನೆಯ ವಿಕ್ರಮ್ ರಾಮಕೃಷ್ಣ ಭಟ್ (28) ಹಾಗೂ ಶಿರಸಿಮಕ್ಕಿಯ ಕಶ್ಯಪ್ ಮಂಜುನಾಥ ಹೆಗಡೆ (27) ಆರೊಪಿಗಳಾಗಿದ್ದಾರೆ.

ಗಿಡಮಾವಿನಕಟ್ಟೆ ಬಳಿ ಬರೂರ್ ಚೆಕ್ ಪೋಸ್ಟ್ ನಲ್ಲಿ ಸಿಲ್ವರ್ ಟೊಯೋಟಾ ಇನ್ನೋವಾ ಕಾರ್‌ನಲ್ಲಿ ಅಕ್ರಮ ಗಾಂಜಾ ಮಾದಕ ವಸ್ತುವನ್ನು ಶಿರಸಿ ಕಡೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವ ವೇಳೆ ಸಿಕ್ಕಿಬಿದ್ದಿದ್ದು ಆರೋಪಿಗಳನ್ನು ವಶಕ್ಕೆ ಪಡೆದು ಅಂದಾಜು 4,500/- ರೂ. ಮೌಲ್ಯದ 80 ಗ್ರಾಂ ಗಾಂಜಾ ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ ಟೊಯೋಟಾ ಇನ್ನೋವಾ ಕಾರ್ ನ್ನು  ಜಪ್ತಿಪಡಿಸಿಕೊಂಡಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿದೆ.

300x250 AD

ಹಿರಿಯ ಅಧಿಕಾರಿಗಳು ಹಾಗೂ ಡಿಎಸ್ಪಿ ಶ್ರೀಮತಿ ಗೀತಾ ಪಾಟೀಲ್ ,ಶಿರಸಿ ಗ್ರಾಮೀಣ ನಿರೀಕ್ಷಕರಾದ ಮಂಜುನಾಥ್ ಗೌಡ ಮಾರ್ಗದರ್ಶನದಲ್ಲಿ ಶಿರಸಿ ‌ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ್ ಎಮ್. ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

Share This
300x250 AD
300x250 AD
300x250 AD
Back to top