Slide
Slide
Slide
previous arrow
next arrow

ಬ್ಯಾಂಕ್ ಕಾರ್ಯನಿರ್ವಹಣೆಯ ಪರಿಚಯ: ಉಪನ್ಯಾಸ ಕಾರ್ಯಕ್ರಮ

300x250 AD

ಸಿದ್ದಾಪುರ: ತಾಲೂಕಿನ ಬಿದ್ರಕಾನಿನ ಎಂ. ಜಿ. ಸಿ. ಎಂ. ಪ್ರೌಢಶಾಲೆಯಲ್ಲಿ ಜು.30 ಶನಿವಾರದಂದು “ಬ್ಯಾಂಕ್ ಕಾರ್ಯನಿರ್ವಹಣೆಯ ಪರಿಚಯ” ವಿಷಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕೆ.ವಿ.ಜಿ. ಬ್ಯಾಂಕ್ ಬಿದ್ರಕಾನಿನ ಮ್ಯಾನೇಜರ್ ಮಂಜುನಾಥ ಪಿ. ಹೆಗಡೆ ಇವರು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.

ಬ್ಯಾಂಕ್ ಖಾತೆ ತೆರೆಯುವುದು, ಅದರ ನಿರ್ವಹಣೆ ಮತ್ತು ಈ- ಬ್ಯಾಂಕ್ ಕುರಿತಾಗಿ ಮಾಹಿತಿ ನೀಡಿದರು. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ಉಂಟಾಗುವ ತೊಡಕು ಹಾಗೂ ಅದರಿಂದ ಎದುರಾಗುವ ಸಮಸ್ಯೆಗಳ ಕುರಿತಾಗಿ ವಿವರಿಸಿದ ಅವರು, ಮಕ್ಕಳು ಮೊಬೈಲ್ ಆಟಗಳನ್ನು ಆಡುವುದರಿಂದ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಹೇಗೆ ಕಳೆದುಕೊಳ್ಳಲಾಗುತ್ತೆ ಎಂದು, ಜೊತೆಗೆ ಎ.ಟಿ.ಎಂ. ಕಾರ್ಡ್ ಬಳಕೆ, ಒ.ಟಿ.ಪಿ. ನಿರ್ವಹಣೆ ಹಾಗೂ ನಖಲಿ ಹಣವನ್ನು ಕಂಡು ಹಿಡಿಯುವದರ ಕುರಿತಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

300x250 AD

ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಸ್. ಎಸ್. ಪಮ್ಮಾರ ಇವರು ಸ್ವಾಗತಿಸಿ, ಪರಿಚಯಿಸಿದರು. ಪ್ರಮಥ ಹೆಗಡೆ ಪ್ರಾರ್ಥನೆಯನ್ನು ನಡೆಸಿಕೊಟ್ಟನು. ವಾಣಿ ಹೆಗಡೆ ಇವರು ವಂದಿಸಿದರು. ಅಪೇಕ್ಷಾ ಹೆಗಡೆ ಮತ್ತು ಧನ್ಯಶ್ರೀ ನಾಯ್ಕ ಇವರು ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top