Slide
Slide
Slide
previous arrow
next arrow

ತಡೆಗೋಡೆ ತೆರವುಗೊಳಿಸಲು ಅಧಿಕಾರಿಗಳಿಗೆ ಮನವಿ

300x250 AD

ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮದ ಅಭಿತೋಟ ಹಾಗೂ ನಾಜಗಾರ ಬಳಿ ಅನಧಿಕೃತವಾಗಿ ನಿರ್ಮಿಸಿದ ತಡೆಗೋಡೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಡಗುಂಜಿ ಬಳ್ಕೂರು ಭಾಗದಿಂದ ಏತನೀರಾವರಿ ಯೋಜನೆಯ ಮೂಲಕ ನೀರು ಕಾಲುವೆ ಮೂಲಕ ಹರಿದು ಅಭಿತೋಟ ಹಾಗೂ ನಾಜಗಾರ ಸಮೀಪದ ಚಿಕ್ಕಪುಟ್ಟ ಹಳ್ಳದ ಮೂಲಕ ನೀರು ಹರಿಯುತ್ತಿತ್ತು. ಕಳೆದ ಕೆಲ ದಿನದ ಹಿಂದೆ ಅನಧಿಕೃತವಾಗಿ ನಿರ್ಮಾಣವಾದ ತಡೆಗೋಡೆಯಿಂದ ನೀರು ಹರಿಯುತ್ತಿಲ್ಲ. ಇದರಿಂದ ನಾಜಗಾರ ಭಾಗದ ನೂರಾರು ಮನೆಗಳ ಬಾವಿಯ ನೀರು ಕಡಿಮೆ ಆಗಿದೆ.

300x250 AD

ಕುಡಿಯಲು ಹಾಗೂ ಬೆಳೆದ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಈ ಕಟ್ಟು ತೆರವು ಮಾಡಿದರೆ ನೂರಾರು ಕುಡುಂಬಗಳಿಗೆ ನೀರಿನ ಬವಣೆ ತಪ್ಪಲಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ನಿರ್ಮಿಸಿದ ಈ ತಡೆಗೋಡೆ ಕೂಡಲೇ ಅಧಿಕಾರಿಗಳು ತೆರವುಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರರಿಗೆ, ತಾಲೂಕ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Share This
300x250 AD
300x250 AD
300x250 AD
Back to top